ಸಂಸದ ಪ್ರಲ್ಹಾದ ಜೋಶಿಯವರ ಹುಟ್ಟು ಹಬ್ಬದ ನಿಮಿತ್ಯ ರಕ್ತದಾನ ಶಿಬಿರ. ಧಾರವಾಡ : ನುಗ್ಗೆಕೇರಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ಕಾರ್ತಿಕ ಶನಿವಾರದ ಪಾವನ ಪರ್ವದಂದು ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಪ್ರಲ್ಹಾದ ಜೋಶಿಯವರು ಸುದೀರ್ಘ ಕಾಲ ಬಾಳಿ ಇನ್ನು ಹೆಚ್ಚಿನ ಜನಸೇವೆಗೈಯಲು ಹಾಗು 2024ರಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರು ದೇಶದ ಪ್ರಧಾನ ಮಂತ್ರಿಗಳಾಗಲೆಂದು ವಿಶೇಷ ಪೂಜೆಗೈದು ಆಂಜನೇಯನ ಆಶೀರ್ವಾದಕ್ಕೆ ಭಾಜನರಾಗಿ ಕೇಂದ್ರ ಸಚಿವರ 61ನೆ ಜನುಮದಿನದ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ಜರುಗಿತು ನೂರಾರು ಯುವಕರು ಹಿತೈಷಿಗಳು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಕೇಂದ್ರ ಸಚಿವರ ಹುಟ್ಟುಹಬ್ಬವನ್ನ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರು ಅಮೃತ ದೇಸಾಯಿ ಕ್ಷಮತಾ ಸೇವಾ ಸಂಸ್ಥೆ ಅಧ್ಯಕ್ಷರು ಉದ್ಯಮಿಗಳು ಗೋವಿಂದ ಜೋಶಿ ಮಾಜಿ ಮಹಾಪೌರರು ಈರೇಶ ಅಂಚಟಗೇರಿ ಜಿಲ್ಲಾದ್ಯಕ್ಷರು ಸಂಜಯ ಕಪಟಕರ ಜಿಲ್ಲಾ ಪ್ರಧಾನಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ ಜಿಲ್ಲಾ ಉಪಾಧ್ಯಕ್ಷ ಈರಣ್ಣ ಹಪ್ಪಳಿ ಮಂಡಲ ಅಧ್ಯಕ್ಷರು ಸುನೀಲ ಮೋರೆ ಪ್ರಧಾನ ಕಾರ್ಯದರ್ಶಿಗಳು ಶ್ರೀನಿವಾಸ ಕೋಟ್ಯಾನ ಹರೀಶ ಬಿಜಾಪುರ ಪಾಲಿಕೆ ಸದಸ್ಯರು ನಿತಿನಇಂಡಿ ಶಂಕರ ಶೇಳಕೆ ಆನಂದಯಾವಗಲ ಅನಿತಾ ಚಳಗೇರಿ ಬಿಜೆಪಿ ಮುಖಂಡರು ಟಿ ಎಸ ಪಾಟೀಲ ರಾಜೇಶ್ವರಿ ಅಳಗವಾಡಿ ಮಾಲತಿ ಬರಗಿ ರಾಕೆಶ ನಾಜರೆ ಸುಮಿತ್ರಾ ಬಡಿಗೇರ ಶೋಭಾ ಜಾಧವ ಶಕ್ತಿ ಹಿರೇಮಠ ವಿನಾಯಕ ಗೊಂದಳಿ ಶಫಿ ಬಿಜಾಪುರಿ ರಾಹುಲ ಮಲ್ಲಿಗವಾಡ ರಾಜೇಶ ಚಾಂದಗುಡೆ ಹಾಗು ಅಪಾರ ಸಂಖ್ಯೆಯ ರಕ್ತದಾನಿಗಳು ಉಪಸ್ಥಿತರಿದ್ದರು.

ಸಂಸದ ಪ್ರಲ್ಹಾದ ಜೋಶಿಯವರ ಹುಟ್ಟು ಹಬ್ಬದ ನಿಮಿತ್ಯ ರಕ್ತದಾನ ಶಿಬಿರ.
